
ಶಿವಮೊಗ್ಗ :- ಭಾರತ ವಿಶ್ವಗುರು ಎನ್ನುವುದಕ್ಕೆ 45ದಿನಗಳ ಕಾಲ ಪ್ರಯಾಗದಲ್ಲಿ ನಡೆದ ಕುಂಭಮೇಳವೇ ಸಾಕ್ಷಿ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೪೫ ದಿನಗಳ ಕಾಲ ಪ್ರಯಾಗದಲ್ಲಿ ನಡೆದ ಮಹಾ ಕುಂಭಮೇಳ ಅತ್ಯಂತ ಯಶಸ್ವಿಯಾಗಿದೆ. ಅದರ ಪರಿಣಾಮ ಇಡೀ ದೇಶ ಸಂಭ್ರಮದಿಂದ ಪ್ರಯಾಗದ ಕುಂಭಮೇಳವನ್ನು ವೀಕ್ಷಿಸಿದ್ದಾರೆ. ಸುಮಾರು 68.23 ಕೋಟಿ ಜನ ಪ್ರತ್ಯಕ್ಷವಾಗಿ ಭಾಗವಹಿಸಿದ್ದಾರೆ. ಇದೊಂದು ಅವಿಸ್ಮರಣೀಯ ಕಾರ್ಯ. ಗಂಗಾ ಯಮುನಾ ಸೇರುವಂತಹ ಜಗಕ್ಕೆ ಹೋಗುವುದು ಒಂದು ಭಾವನಾತ್ಮಕ ಸಂಗತಿ. ಇದು ಹಿಂದೂ ಸಮಾಜಕ್ಕೆ ದೊಡ್ಡ ಶಕ್ತಿ ಚೈತನ್ಯವನ್ನು ತುಂಬಿರುವಂತಹದ್ದು. ಪ್ರಾಯಾಗದ ಕುಂಭ ಮೇಳ ಈ ಒಂದು ವಾತಾವರಣವನ್ನು ಸೃಷ್ಟಿಸಿರುವುದು ನಮ್ಮ ಹೆಮ್ಮೆ ಎಂದರು.

ದೇಶ ವಿದೇಶಗಳಿಂದ ಆಗಮಿಸಿದ್ದರು. ಭಾರತ ವಿಶ್ವ ಗುರು ಆಗುತ್ತದೆ ಎನ್ನುವುದ್ದಕ್ಕೆ ಅನೇಕ ಜನರು ಹೇಳುತ್ತಾರೆ. ವಿದೇಶಿಗರು ಭಾರತೀಯರು ಎಲ್ಲಾರೂ ಬಂದಿದ್ದರು. ವಿಶ್ವ ಗುರು ಭಾರತ ಆಗುತ್ತದೆ ಎನ್ನುವುದಕ್ಕೆ ಎರಡು ಮಾತಿಲ್ಲ ಎಂಬ ನಂಬಿಕೆ ಇದೆ. ಲಕ್ಷಾಂತರ ಜನರ ಭಕ್ತಿ ಭಾವನೆಗೆ ಕುಂಭ ಮೇಳ ಸಾಕ್ಷಿಯಾಗಿದೆ. ಇದಕ್ಕೆ ಕಾರಣೀಭೂತರಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಮತ್ತು ಅವರ ತಂಡ ವ್ಯವಸ್ಥಿತವಾಗಿ ನಡೆಸಿದ್ದಾರೆ. ನರೇಂದ್ರ ಮೋದಿಯವರ ಮಾರ್ಗದರ್ಶನದ ಮೂಲಕ ಅವರದೇ ಆದ ಕಾರ್ಯತಂತ್ರದ ಮೂಲಕ ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ ಎಂದರು.
ಅನೇಕ ಸಾಧು ಸಂತರ ತಂಡವೇ ಅಲ್ಲಿತ್ತು. ಆಗಮಿಸಿದ್ದ ಭಕ್ತಾದಿಗಳಿಗೆ ಎಲ್ಲಾ ರೀತಿಯ ಸಮಗ್ರ ವ್ಯವಸ್ಥೆ ಮಾಡಲಾಗಿತ್ತು. ಅವಶ್ಯಕತೆಗೆ ತಕ್ಕಂತೆ ಎಲ್ಲದನ್ನೂ ಸಿಗುವ ರೀತಿಯಲ್ಲಿ ಅವಶ್ಯಕತೆ ಮಾಡಲಾಗಿತ್ತು. ಸಮತಾ ಭಾರತೀಯರ ಪ್ರವಾಗಿ ಯೋಗಿ ಆದಿತ್ಯ ನಾಥ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೋಟಿಗಟ್ಟಲೆ ಜನ ಸ್ನಾನ ಮಾಡುತ್ತಿದ್ದರೂ ಕೂಡಾ ನೀರು ಅಷ್ಟೊಂದು ತಿಳಿಯಾಗಿತ್ತು. ಅಲ್ಲಿಗೆ ಬಂದಿದ್ದ ಭಕ್ತರು ಹೆಚ್ಚು ಸಂಭ್ರಮದಿಂದ ಆಗಮಿಸಿದ್ದರು. 10 ಸಾವಿರ ಬೋನಸ್ ನೀಡುವುದರ ಜೊತೆಗೆ ಪೋಲಿಸ್ ಸಿಬ್ಬಂದಿಗಳ ಸಹನೆಯನ್ನು ಮೆಚ್ಚಬೇಕು. ಅತ್ಯಂತ ಸಂಯಮದಿಂದ ತಾಳ್ಮೆಯಿಂದ 75 ಸಾವಿರ ಪೋಲಿಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದರು. ದೋಣಿಯ ಮೇಲೆ ಕರೆದುಕೊಂಡು ಹೋಗುವ ವ್ಯವಸ್ಥೆಯು ಇತ್ತು. ಒಂದು ಸರ್ಕಾರ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನೋಡಬೇಕು.
16 ಸಾವಿರ ರೂಪಾಯಿ ಸಂಭಾವನೆ ಕೊಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚುವರಿ ಬೋನಸ್ ಅನೌನ್ಸ್ ಮಾಡುತ್ತಾರೆ. 45 ದಿನಗಳ ಕುಂಭ ಮೇಳದ ಅತ್ಯಂತ ಅವಿಸ್ಮರಣೀಯ ಕಾರ್ಯ. ಹೆಚ್ಚು ಭಾವನಾತ್ಮಕನಾಗಿದ್ದೆ. ಎಲ್ಲ ಹಿಂದೂಗಳು ಒಮ್ಮೆಯಾದರೂ ಹೋಗಿ ಬರಬೇಕು ಎಂದರು.
ಮುತಾಲಿಕ್ ನಿರ್ಭಂಧನೆ ಖಂಡನೀಯ: ರಾಜ್ಯ ಸರ್ಕಾರ ಹಿಂದೂ ಹೋರಾಟಗಾರರನ್ನು ನಿರ್ಬಂದಿಸುವ ಕೆಲಸ ಮಾಡಿದೆ. ಪ್ರಮೋದ್ ಮುತಾಲಿಕ್ ಅವರು ಏನು ಅಪರಾಧ ಮಾಡಿದ್ದಾರೆ. ಅವರ ಮೇಲೆ ಹಾಕಿರುವ ಎಲ್ಲ ಕೇಸ್ಗಳು ವಾಪಸ್ ಹೋಗಿವೆ. ಯಾವ ಶಿಕ್ಷೆಯೂ ಅವರಿಗೆ ಆಗಿಲ್ಲ. ಶಿವಮೊಗಕ್ಕೆ ಆಗಮಿಸದ ರೀತಿಯಲ್ಲಿ ಪತ್ರಿಕಾಗೋಷ್ಠಿಯನ್ನು ಮಾಡದ ರೀತಿಯಲ್ಲಿ ಅವರನ್ನು ನಿರ್ಬಂಧ ಮಾಡಿದ್ದಾರೆ. ಈ ರೀತಿಯ ರಾಜ್ಯ ಸರ್ಕಾರದ ನಿರ್ಧಾರ ಅಕ್ಷಮ್ಯ. ಲವ್ ಜಿಹಾದ್ ಪುಸ್ತಕ ಬಿಡುಗಡೆ ಮಾಡುವುದು ಅಪರಾಧವಾ, ಅವರೇನು ಬೆಂಕಿ ಹಚ್ಚಲು ಬಂದಿದ್ದರಾ. ಹಿಂದೂ ನಾಯಕರನ್ನು ಬಗ್ಗು ಬಡಿಯುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ರಕ್ಷಣಾಧಿಕಾರಿಗಳ ಮೇಲೆ ನನಗೆ ಗೌರವವಿದೆ. ಪುಸ್ತಕ ಬಿಡುಗಡೆ ಮಾಡುವುದನ್ನು ತಡೆಯುತ್ತಿರಿ, ಡ್ರಗ್ ಮಾಫಿಯಾ ಮಾಡುವವರನ್ನು, ಮರಳು ದಂಧೆ ಮಾಡುವವರನ್ನು ಬಿಡುತ್ತೀರಿ. ಕಾಂಗ್ರೆಸ್ ಸರ್ಕಾರ ನೀತಿ ಮತ್ತೊಮ್ಮೆ ಪ್ರಕಟವಾಗಿದೆ. ರಾಜ್ಯ ಸರ್ಕಾರದ ಈ ದುರ್ವರ್ತನೆಯನ್ನು ಖಂಡಿಸುತ್ತೇನೆ ಎಂದರು.
ಇನ್ನೊಂದು ವರ್ಷದಲ್ಲಿ 3 ಸಾವಿರ ಆಶ್ರಯಮ ಮನೆಗಳ ವಿತರಣೆ: ಆಶ್ರಯ ಬಡಾವಣೆಯಲ್ಲಿ ಇನ್ನು ೩ತಿಂಗಳ ಒಳಗೆ 574 ಮನೆಗಳ ನ್ನು ವಿತರಣೆ ಮಾಡಲಾಗುವುದು.ಈಗಾಗಲೇ 2ಹಂತದಲ್ಲಿ ಮನೆಗಳನ್ನಿ ವಿತರಿಸಲಾಗಿದೆ. ಮತ್ತು ವಿತರಿಸಲಾದ ಮನೆಗಳಿಗೆ ಉಳಿದ ಮನೆಗಳಿಗೆ ಜೂನ್ ತಿಂಗಳ ಒಳಗೆ ನೀರು ಸಿಗುವಂತೆ ಪ್ಲಾನ್ ಮಾಡಲಾಗಿದೆ. 3ಸಾವಿರ ಮನೆಗಳಿಗೆ ಸಿಗಬೇಕಾದ ವಿದ್ಯುತ್. ಸರ್ಕಾರ ಅದಕ್ಕೆ 12 ಕೋಟಿ ಕೊಡುವುದಾಗಿ ಹೇಳಿದೆ. ಮೂರರಿಂದ ನಾಲ್ಕು ತಿಂಗಳಿನ ಉಳಿದ ಮನೆಯನ್ನು ಕೊಡುವುದಾಗಿ ಹೇಳಿದ್ದಾರೆ. ಸುಮಾರು ಇನ್ನೊಂದು ವರ್ಷದಲ್ಲಿ ಸಂಪೂರ್ಣ ೩ಸಾವಿರ ಮನೆಗಳನ್ನು ನೀಡಬೇಕೆಂದು ಭಾರತೀಯ ಜನತಾ ಪಕ್ಷ ನಿರ್ಧಾರ ಮಾಡಿದೆ. ಸರ್ಕಾರದ ಒಂದು ವ್ಯವಸ್ಥೆಯ ಭಾಗ. ಆದಷ್ಟು ಬೇಗ ಸಿಗುತ್ತದೆ.
ಆಶ್ರಯ ಮನೆಗಳ ವಿತರಣೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಂದ ಒಳ್ಳೆ ಕಡೆ ಮನೆ ನೀಡುವುದಾಗಿ ೫೦ ಸಾವಿರದ ಒಳಗೆ ಹಣ ಪಡೆದಿದ್ದಾರೆ ಎಂಬ ಆರೋಪಗಳು ನನ್ನ ಕಿವಿಗೂ ಬಿದ್ದಿದೆ. ನಾನಾಂತು ಫಲಾಟನುಭವಿಗಳಿಂದ ಅರ್ಧ ಟೀ ನ್ನು ಕುಡಿದಿಲ್ಲ. ಈ ರೀತಿ ಹಣ ಪಡೆದವರು ಮನುಷ್ಯರೇ ಅಲ್ಲ. ಅವರಿಗೆ ದೇವರು ಒಳ್ಳೆಯದನ್ನು ಮಾಡುವುದಿಲ್ಲ ಎಂದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿ ನಿಧಿ ಕಾರ್ಯಕ್ರಮದ ಪ್ರಶಸ್ತಿ ಪಡೆದ ಶಿವಮೊಗ್ಗದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದರು. ಭಜನಾ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿನಾಯಕ ಬಾಯರಿ ಅವರು ಧೈವಾದೀನರಾಗಿರುವುದು ನೋವು ತಂದಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಅವರ ಮನೆಯವರಿಗೆ ಕರುಣಿಸಲಿ ಎಂದು ಶ್ರದ್ಧಾಂಜಲಿ ಸಲ್ಲಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮೋಹನ್ ರೆಡ್ಡಿ, ಶ್ರೀನಾಗ್, ಮಂಜುನಾಥ್, ದೀನ ದಯಾಳ್, ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
