ಶಿವಮೊಗ್ಗ :- ಶ್ರೀ ಕನಕದಾಸರ ೫೩೭ನೇ ಜಯಂತ್ಯೋತ್ಸವ ಮತ್ತು ಪತಂಜಲಿ ಸಂಸ್ಥೆಯ 27ನೇ ವರ್ಷದ ಅಂಗವಾಗಿ ಡಿ. 14ರಂದು ಬೆಳಿಗ್ಗೆ 9ಗಂಟೆಯಿಂದ ಕುವೆಂಪು ರಂಗಮಂದಿರದಲ್ಲಿ ರಾಜ್ಯಮಟ್ಟದ ಶ್ರೀ ಕನಕದಾಸರ ಕೀರ್ತನೋತ್ಸವ ಗೀತಾಗಾಯನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕತ ಯೋಗಾಚಾರ್ಯ ಪತಂಜಲಿ ಜೆ. ನಾಗರಾಜ್ ತಿಳಿಸಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಂದು ರಾಜ್ಯಮಟ್ಟದ ಕನಕ ಕಥಾಕೀರ್ತನ ಮಹೋತ್ಸವ ಸಮ್ಮೇಳನ ತರಬೇತಿ ಕಾರ್ಯಾಗಾರ ಹಾಲುಮತ ಸಂಸ್ಕೃತಿ ಕನಕ ಕಲಾ ವೈಭವ ಗೀತಾಗಾಯನ ನೃತ್ಯರೂಪಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
27 ಕಲಾ ತಂಡದ 400 ಜನ ಕಲಾವಿದರ ಮೂಲಕ ರಾಜ್ಯಮಟ್ಟದ ಶ್ರೀ ಕನಕದಾಸರ ಗೀತಾಗಾಯನ ಸ್ಪರ್ಧೆಯಲ್ಲಿ ಶಿವಮೊಗ್ಗ ಚಿಕ್ಕಮಗಳೂರು ದಾವಣಗೆರೆ ಚಿತ್ರದುರ್ಗ ಬಳ್ಳಾರಿ ಜಿಲ್ಲೆಯಿಂದ ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಶ್ರೀ ಕನಕದಾಸರ ತತ್ವ ಆದರ್ಶ ಕೀರ್ತನೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಅಭಿಯಾನ ಆಯೋಜಿಸಲಾಗಿದೆ ಎಂದರು.
ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಪತಂಜಲಿ ಸಂಸ್ಥೆ ಗೌ:ಅಧ್ಯಕ್ಷ ಎಂ. ಈಶ್ವರಪ್ಪ ನವುಲೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೇರಿದಂತೆ ರಾಜಕೀಯ ಗಣ್ಯರು, ಸಮಾಜದ ಮುಖಂಡರು, ಸಂಘ ಸಂಸ್ಥೆಯ ಮುಖ್ಯಸ್ಥರು ಭಾಗವಹಿಸಲಿದ್ದಾರೆ ಎಂದರು.
ಅಪರೂಪದ ವನ್ಯಜೀವಿ ಪರಿಸರ ಛಾಯಾಚಿತ್ರ ಪ್ರದರ್ಶನ ಶಿವಮೊಗ್ಗ ನಾಗರಾಜ್ (ಪ್ರಜವಾಣಿ), ಕೆ.ಪಿ.ಪೂರ್ಣಚಂದ್ರ ತೇಜಸ್ವಿ ವನ್ಯಜೀವಿ ಛಾಯಾಗ್ರಾಹಕರ ಬಳಗ ತೀರ್ಥಹಳ್ಳಿ, ಮಂಡಗದ್ದೆ ನಟರಾಜ್, ಡಿ.ಬಿ.ಹಳ್ಳಿ, ತೀರ್ಥಹಳ್ಳಿ ವಿನಾಯಕ್ ಗುಜ್ಜರ್, ಸತೀಶ್ ಸಾಗರ, ವಸುಮ ಮಂಜುನಾಥ್ ಶಿವಮೊಗ್ಗ, ನಾಗರಾಜ್ ಡಿ.ಬಿ.ಹಳ್ಳಿ, ಭದ್ರಾವತಿ, ಪ್ರದೀಪ್ ಕುಣಿಬೈಲ್, ತೀರ್ಥಹಳ್ಳಿ ಇವರಿಂದ ಏರ್ಪಡಿಲಾಗಿದೆ ಎಂದರು.
ಪತಂಜಲಿ ಸಂಸ್ಥೆ ಗೌ:ಉಪಾಧ್ಯಕ್ಷ ದಿ. ಕೆ. ದೇವೇಂದ್ರಪ್ಪ ಸ್ಮರಣಾರ್ಥ ಡಾ. ಡಿ. ಗೋಪಾಲ್ ಮತ್ತು ತಂಡ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಇವರಿಂದ ಕಲಾವಿದರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದ್ದು, ಇದೇ ಸಂಧರ್ಭದಲ್ಲಿ ಏಲೆಮರೆಕಾಯಿಯಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಕನಕ ಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪತಂಜಲಿ ಸಂಸ್ಥೆಯ ಗೌರವಾಧ್ಯಕ್ಷ ಎಂ. ಈಶ್ವರಪ್ಪ ನವುಲೆ, ಪ್ರಮುಖರಾದ ಡಾ. ಪಿ. ಬಾಲಪ್ಪ, ಎಂ.ಪೂವಯ್ಯ, ಪರಿಸರ ಸಿ. ರಮೇಶ್, ನಿರ್ದೇಶಕರಾದ ಸುಶೀಲ ಭವಾನಿಶಂಕರ್ರಾವ್, ಭವಾನಿಶಂಕರ್ರಾವ್, ನರಸಿಂಹಮೂರ್ತಿ, ಸರಳಾವಾಸನ್, ಶೋಭಾ ಅನಂದ್, ಸೌಭಾಗ್ಯ ಇನ್ನಿತರರು ಉಪಸ್ಥಿತರಿದ್ದರು.