
ಶಿವಮೊಗ್ಗ :- ಶಿವಮೊಗ್ಗದಾದ್ಯಂತ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಕಳೆದ 8 ತಿಂಗಳಲ್ಲಿ 9 ಕೋಟಿಗಿಂತ ಅಧಿಕ ಹಣವನ್ನು ಕಳೆದುಕೊಂಡ 86 ಪ್ರಕರಣಗಳನ್ನು ತನಿಖೆ ಮಾಡುತ್ತಿ ದ್ದೇವೆ. ಆದರೆ ಬಹುತೇಕ ದೂರು ನೋಂದಣಿ ವಿಳಂಬ ದಿಂದಾಗಿ ರೂ. 50 ಲಕ್ಷಗಳನ್ನು ಮಾತ್ರ ರಿಕವರಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿರೂಪಾಕ್ಷಪ್ಪ ವೈ.ಎಸ್. ತಿಳಿಸಿದರು.
ಅವರು ಬಜಾಜ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ಸೂರ್ಯ ಕಂಫರ್ಟ್ನಲ್ಲಿ ಆಯೋಜಿಸಲಾಗಿದ್ದ ನಾಕೌಟ್ ಡಿಜಿಟಲ್ ಫ್ರಾಡ್ ಸೈಬರ್ ವಂಚನೆ ಜಗೃತಿ ಕಾರ್ಯ ಕ್ರಮದಲ್ಲಿ ಮಾತನಾಡುತ್ತಾ, ಕಳೆದ ವರ್ಷ 144 ಪ್ರಕರಣಗಳು ದಾಖ ಲಾಗಿದ್ದು, ಜನರು 11 ಕೋಟಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಕೇವಲ 2 ಕೋಟಿ ಮೊತ್ತದ ಹಣ ಮಾತ್ರ ಹಿಂಪಡೆಯಲು ಸಾಧ್ಯ ವಾಗಿದೆ ಎಂದರು. ವಂಚನೆಯ ನಂತರದ ಮೊದಲ 24 ಗಂಟೆಗಳನ್ನು ಗೋಲ್ಡನ್ ಸಮಯ ಎಂದು ಪರಿಗಣಿಸಲಾಗು ತ್ತದೆ. ಈ ಅವಧಿಯಲ್ಲಿ ಅಪರಾಧಿಯನ್ನು ಪತ್ತೆಹಚ್ಚುವ ಮತ್ತು ಕಳೆದುಹೋದ ಹಣವನ್ನು ಮರು ಪಡೆಯುವ ಸಾಧ್ಯತೆಗಳು ಹೆಚ್ಚಿರು ತ್ತವೆ. ನಾಗರೀ ಕರು ಮುಂದೆ ಬಂದು, ದೂರುಗಳನ್ನು ತಕ್ಷಣ ನೋಂದಾ ಯಿಸಿಕೊಳ್ಳಬೇಕು ಮತ್ತು ಹೆಚ್ಚುತ್ತಿರುವ ಸೈಬರ್ ಅಪರಾಧದ ಬೆದರಿಕೆಯನ್ನು ಎದುರಿಸಲು ನಮ್ಮ ಸಹಾಯವನ್ನು ಪಡೆಯಬೇಕು ಎಶಂದು ಹೇಳಿದರು.
ಬಿಎಫ್ಎಲ್ನ ವಕ್ತಾರ ವೆಂಕ ಟೇಶನ್ ವಿ.ಎಸ್. ಮಾತನಾಡಿ, ನಮ್ಮ ಗ್ರಾಹಕರ ಆರ್ಥಿಕ ಸುರಕ್ಷತೆ ನಮಗೆ ಅತ್ಯಂತ ಮುಖ್ಯ ವಾಗಿದೆ. ಪ್ರತಿಯೊಬ್ಬರೂ ಸೈಬರ್ ವಂಚನೆ ಗಳಿಂದ ಸುರಕ್ಷಿತವಾಗಿರಲು ಜಗೃತಿ ಮೂಡಿಸುತಿದ್ದೇವೆ. ದೇಶದ 100 ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಸಂವಾದಾತ್ಮಕ ಕಾರ್ಯಾ ಗಾರಗಳು, ಡಿಜಿಟಲ್ ಜಗೃತಿ ಅಭಿಯಾನಗಳು ಮತ್ತು ಸಮು ದಾಯ ಸಂಪರ್ಕ ಕಾರ್ಯ ಕ್ರಮಗಳ ಸರಣಿಯನ್ನು ಹಮ್ಮಿ ಕೊಂಡಿದ್ದೇವೆ ಎಂದು ಹೇಳಿದರು.
ಸೈಬರ್ ಅಪರಾಧ ಪೊಲೀಸ್ ಠಾಣೆಯ ಸಹಾಯಕ ತನಿಖಾಧಿಕಾರಿ ರವಿ ಕುಮಾರ್ ಜಿ.ಎನ್. ನಿವೃತ್ತ ಪೊಲೀಸ್ ಉಪ ವರಿಷ್ಠಾಧಿಕಾರಿ ಎಂ.ಎನ್.ರುದ್ರಪ್ಪ ಸೇರಿದಂತೆ ಇನ್ನಿತರರಿದ್ದರು.