ಶಿವಮೊಗ್ಗ :- ಕುವೆಂಪು ನಗರ ಬಳಿಯ ಬಂಗಾರಪ್ಪಬಡಾವಣೆಯಲ್ಲಿ ನಡೆದಂತಹ ದೇವರ ವಿಗ್ರಹ ಧ್ವಂಸಗೊಳಿಸಿರುವ ಅಹಿತಕರ ಘಟನೆಯ ವಿಚಾರವಾಗಿ ಮಾಜಿ ಮಹಾನಗರ ಪಾಲಿಕೆ ಸದಸ್ಯ ಹೆಚ್.ಸಿ ಯೋಗೇಶ್ ರವರು ಭೇಟಿ ನೀಡಿ ಪರಿಶೀಲಿಸಿ, ಇಲ್ಲಿನ ಶಾಂತಿನಗರದಿಂದ ಪ್ರವೇಶಿಸುವಾಗ ನಾಗರಕಟ್ಟೆ, ಗಣಪತಿ ದೇವಸ್ಥಾನ, ಜೊತೆಗೆ ಮಸೀದಿ ಚರ್ಚ್ ಗಳು ಸಹ ಇದೆ. ಎಲ್ಲಾ ರೀತಿಯ ಜನರು ವಾಸವಾಗಿರುವ ಬಡಾವಣೆಯಾಗಿದೆ ಈ ರೀತಿ ಮನೆಯ ಮುಂಭಾಗದಲ್ಲಿ ದೇವರ ವಿಗ್ರಹವನ್ನು ಧ್ವಂಸಗೊಳಿಸಿರುವುದು ಖಂಡನೀಯ ಎಂದು ತಿಳಿಸಿದರು.
ಈ ರೀತಿಯ ಕೃತ್ಯ ಎಸಗಿದ ದುಷ್ಕರ್ಮಿಗಳಿಗೆ ಬುದ್ಧಿ ಪ್ರಮಣಿಯಾಗಿರುವುದು ಎದ್ದು ಕಾಣುತ್ತಿದೆ. ಪೊಲೀಸ್ ಇಲಾಖೆಯವರು ಈಗಾಗಲೇ ಈ ಘಟನೆಗೆ ಸಂಬಂಧಿಸಿದ ಮೂವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳಲಾಗಿದೆ. ರಾಜಕೀಯವಾಗಿ ಕೆ.ಎಸ್. ಈಶ್ವರಪ್ಪನವರಾಗಲಿ ಚನ್ನಬಸಪ್ಪನವರಾಗಲಿ ಹೇಳಿಕೆಗಳನ್ನು ನೀಡುವ ಮೊದಲು ಅನಧಿಕೃತ ಹಾಗೂ ಅಕ್ರಮ ಜಗಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.
ಅನಧಿಕೃತವೇ ಬೇರೆ, ಅಕ್ರಮವೇ ಬೇರೆ ಆಗಿರುವುದರಿಂದ ಅಕ್ರಮವಾಗಿ ಮನೆ ಕಟ್ಟಿರುವುದನ್ನು ಮಹಾನಗರ ಪಾಲಿಕೆಯವರು ಪರಿಶೀಲಿಸಿ ನೋಟಿಸ್ ನೀಡುವ ಮುಖಾಂತರ ಕ್ರಮ ಕೈಗೊಂಡಿದ್ದಾರೆ. ಅಕ್ರಮ ಎಂದು ಹೇಳುವ ಮುಖಾಂತರ ಚನ್ನಬಸಪ್ಪನವರು ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಕಾಲದಲ್ಲಿ ಈ ಮನೆಗಳನ್ನು ತೆರವುಗೊಳಿಸಲು ಹೋಗಿದ್ದರು. ಅಕ್ರಮವಾಗಿ ನಿರ್ಮಾಣಗೊಂಡಿರುವ ಮನೆಗಳಾಗಿದ್ದರು ಸಹ ಆ ಭಾಗದಲ್ಲಿ 25ಮನೆಗಳಿಗೆ ಮಹಾನಗರ ಪಾಲಿಕೆ ವತಿಯಿಂದ ಮೂಲಭೂತ ಸೌಕರ್ಯಗಳನ್ನು ಸಹ ಒದಗಿಸಿರುತ್ತಾರೆ. ದೇವಸ್ಥಾನದ ನಿರ್ಮಾಣವನ್ನು ಸಹ ಆ ಭಾಗದ ನಿವಾಸಿಗಳೇ ಮಾಡಿದ್ದು. ವಿನಾಕಾರಣ ಮನೆಗಳ ವಿಚಾರವಾಗಿ ಈಶ್ವರಪ್ಪನವರು ಹಾಗೂ ಚನ್ನಬಸಪ್ಪನವರು ೨೫ ಮನೆಗಳಲ್ಲಿ ವಾಸ ಮಾಡುತ್ತಿರುವ ನಿವಾಸಿಗಳಿಗೆ ತೊಂದರೆ ಕೊಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಪ್ರಮುಖವಾಗಿ ಆ ಭಾಗದಲ್ಲಿನ 21ಮನೆಗಳು ಹಿಂದೂಗಳದ್ದಾಗಿದ್ದು ನಾಲ್ಕು ಮನೆಗಳು ಮುಸಲ್ಮಾನರದ್ದು, ಆದ್ದರಿಂದ ರಾಜಕೀಯ ಮಾಡದೆ ಜನರ ಒಳಿತನ್ನು ಗಮನಿಸಬೇಕೆಂದು ಈ ಮೂಲಕ ತಿಳಿಸಿದ್ದು, ರಾಗಿಗುಡ್ಡ ಭಾಗದಲ್ಲಿ ಈಗಾಗಲೇ 14ಗಣಪತಿಗಳನ್ನು ಪ್ರತಿ ವರ್ಷ ಪ್ರತಿಷ್ಠಾಪಿಸುತ್ತಾ ಬಂದಿದ್ದು, ಇದೇ ಗಣಪತಿ ಹಬ್ಬದಂದು ಬಂಗಾರಪ್ಪ ಬಡಾವಣೆಯಲ್ಲೂ ಸಹ ಗಣಪತಿಯ ಪ್ರತಿಷ್ಠಾಪನೆಯನ್ನು ಮಾಡುವ ಮುಖಾಂತರ ಒಟ್ಟು ರಾಗಿಗುಡ್ಡ ಭಾಗದಲ್ಲಿ 15ಗಣಪತಿಗಳನ್ನು ಪ್ರತಿಷ್ಠಾಪಿಸಿ, ಪ್ರತಿ ವರ್ಷದಂತೆ ಒಟ್ಟಿಗೆ ಹದಿನೈದು ಗಣಪತಿಗಳ ವಿಜೃಂಭಣೆಯ ವಿಸರ್ಜನೆಯನ್ನು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೆರವೇರಿಸುವುದಾಗಿ ಹೆಚ್ ಸಿ ಯೋಗೇಶ್ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯ ಧೀರಜ್ ಹೊನ್ನವಿಲೆ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ವಿಶ್ವನಾಥ್ ಕಾಶಿ, ಕಾಂಗ್ರೆಸ್ ಮುಖಂಡರಾದ ಜಿ, ಮಧುಸೂದನ್, ನವಲೆ ಚೇತನ್, ಅನಿಲ್ ಪಾಟೀಲ್, ನಾಲ್ಕನೇ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಂ. ಮಹಾದೇವ, ೩ನೇ ವಾರ್ಡ್ ಅಧ್ಯಕ್ಷ ಇರ್ಫಾನ್ ಖಾನ್ ಹಾಗೂ ಮುಖಂಡರಾದ ಪವನ್, ಮುಕ್ತಿಯಾರ್, ಬಸವರಾಜ್, ಕಾಲ ಮಿರ್ಚಿ, ರಹಮತ್ , ಶ್ರೀನಿವಾಸ್, ಸದ್ದಾಂ, ಪ್ರಸಾದ್ ಹಾಗೂ ಬಂಗಾರಪ್ಪ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.