Flowers in Chania

ಬ್ಲೂಸ್ಟಾರ್ ಲಕ್ಷ್ಮಣ್ ಮಗುವಿಗೆ ಪೋಷಕರ ಒತ್ತಾಸೆ ಮೇರೆಗೆ ವಿಷ್ಣು ಎಂದು ಹೆಸರಿಟ್ಟ ಯಡಿಯೂರಪ್ಪ

ಶಿವಮೊಗ್ಗ:- ಬಿಜೆಪಿ ರಾಷ್ಟ್ರೀಯ ನಾಯಕರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳೂ ಆದ ಬಿ.ಎಸ್.  ಯಡಿಯೂರಪ್ಪ ಅವರು ಮಗುವಿನ ನಾಮಕರಣ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಕ್ಕಳ ಪೋಷಕರ ಒತ್ತಾಸೆ ಮೇರೆಗೆ ಆ ಮಗುವಿಗೆ ವಿಷ್ಣು ಎಂದು ಹೆಸರಿಟ್ಟ ಪ್ರಸಂಗ ನಡೆದಿದೆ.

ಮಗುವನ್ನು ಕೈಗೆತ್ತಿಕೊಂಡ ಯಡಿಯೂರಪ್ಪ ಅವರು, ಮೂರು ಬಾರಿ ಮಗುವಿನ ಕಿವಿಯಲ್ಲಿ ವಿಷ್ಣು ವಿಷ್ಣು ವಿಷ್ಣು ಎಂದು ಹೇಳಿ ಈ ಹೆಸರು ನಿಮಗೆ ಇಷ್ಟವೇ ಎಂದು ಮಗುವಿನ ಪೋಷಕರನ್ನು ಕೇಳಿದಾಗ ಅದಕ್ಕೆ ಅವರು ಸಮ್ಮತಿ ವ್ಯಕ್ತಪಡಿಸಿ ಈ ಹೆಸರು ಖುಷಿ ತಂದಿದೆ ಎಂದರು.

ಶಿವಮೊಗ್ಗದ ಖ್ಯಾತ ಉದ್ಯಮಿ ಹಾಗೂ ಕೃಷಿಕರಾದ ಬ್ಲೂಸ್ಟಾರ್ ಕೆ. ಲಕ್ಷ್ಮಣ್ ಅವರ ಸವಿನಯ ಕರೆಯ ಮೇರೆಗೆ ಸೋಮಿನಕೊಪ್ಪ ರಸ್ತೆ ರೈಲ್ವೆ ಅಂಡರ್‌ಪಾಸ್ ಬಳಿಯ `ನೀಲಿ ನಕ್ಷತ್ರ’ ನಿವಾಸದಲ್ಲಿ ಜರುಗಿದ ಲಕ್ಷ್ಮಣ್ ಅವರ ಮರಿ ಮಗನ ನಾಮಕರಣಕ್ಕೆ ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಆಗಮಿಸಿದ್ದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಮಗುವನ್ನು ಕೈಗೆತ್ತಿಕೊಂಡಾಗ ಮಗುವಿನ ತಂದೆ-ತಾಯಿ ಕಾರ್ತಿಕ್ ಮತ್ತು ತೇಜಸ್ವಿನಿ ಅವರು ಈ ಮಗುವಿಗೆ ತಾವೇ ನಾಮಕರಣ ಮಾಡುವಂತೆ ಕೇಳಿಕೊಂಡಾಗ ಅವರ ವಿನಂತಿ ಮೇರೆಗೆ ಈ ಮುದ್ದು ಮಗುವಿಗೆ ವಿಷ್ಣು ಎಂದು ಹೆಸರಿಟ್ಟು ಕರೆಯುವಂತೆ ಬಿಎಸ್‌ವೈ ಅವರು ಹೇಳಿದಾಗ, ಕುಟುಂಬದವರೆಲ್ಲ ಇದಕ್ಕೆ ಸಮ್ಮತಿಸಿದರು.

ಈ ಒಂದು ಸಂತಸ ಸಮಾರಂಭದಲ್ಲಿ ಬ್ಲೂಸ್ಟಾರ್ ಕೆ. ಲಕ್ಷ್ಮಣ್, ಮಗುವಿನ ತಂದೆ ತಾಯಿ ಕಾರ್ತಿಕ್- ಶ್ರೀಮತಿ ತೇಜಸ್ವಿನಿ, ಕುಟುಂಬವರ್ಗದ ಎಲ್. ರಮೇಶ್, ಶ್ರೀಮತಿ ಶೋಭಾರಾಣಿ, ತ್ರಿವಿಕ್ರಮ್ ಮತ್ತು ಶ್ರೀಮತಿ ಅಕ್ಷತಾ, ಎಲ್. ಮಹೇಶ್ ಮತ್ತು ಶ್ರೀಮತಿ ರಮ್ಯ ಹಾಗೂ ಕುಟುಂಬದ ಪೃಥ್ವಿ, ಪಾರ್ಥ ಹಾಗೂ ಮೈಸೂರಿನ ಪ್ರಸಾದ್ ಸೇರಿದಂತೆ ಹಲವರು ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ. ಲಕ್ಷ್ಮಣ್ ಅವರು, ಯಡಿಯೂರಪ್ಪ ಅವರ ಬಗ್ಗೆ ತಮಗೆ ವಿಶೇಷ ಗೌರವವಿದೆ, ಯಡಿಯೂರಪ್ಪ ಅವರಿಗೆ ಮೊದಲಿನಿಂದಲೂ ಬ್ಲೂಸ್ಟಾರ್ ಲಕ್ಷ್ಮಣ್ ಅವರನ್ನು ಕಂಡರೆ ವಿಶೇಷ ಪ್ರೀತಿ. ಹೀಗಾಗಿ ತಮ್ಮ ಮರಿಮಗನ ನಾಮಕರಣಕ್ಕೆ ಬರುವಂತೆ ಅವರಲ್ಲಿ ವಿನಂತಿಸಿದ್ದೆ, ನಮ್ಮ ಆಹ್ವಾನ ಮನ್ನಿಸಿ ಬಿಎಸ್‌ವೈ ಅವರು ಕಾರ್ಯಕ್ರಮಕ್ಕೆ ಬಂದು ಮಗುವನ್ನು ಎತ್ತಾಡಿಸಿ ಆ ಮಗುವಿಗೆ ವಿಷ್ಣು ಎಂದು ನಾಮಕರಣ ಮಾಡಿದ್ದಾರೆ. ನಿಜಕ್ಕೂ ಇದು ತಮಗೂ ಹಾಗೂ ತಮ್ಮ ಕುಟುಂಬಕ್ಕೆ ಅತೀವ ಸಂತಸ ತಂದಿದೆ ಎಂದಿದ್ದಾರೆ.

Abhi

Abhi

Leave a Reply

Your email address will not be published. Required fields are marked *