ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ವಾಹನದ ಬಾಡಿಗೆ ಸೇವೆ ನೀಡಲು ಪ್ರವಾಸಿ ಕಾರಿನ ಚಾಲಕರ ಸಂಘ ಮನವಿ

ಶಿವಮೊಗ್ಗ :- ನೂತನವಾಗಿ ನಿರ್ಮಾಣಗೊಂಡಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ವಾಹನದ ಬಾಡಿಕೆ ಸೇವೆಯನ್ನು ಪ್ರವಾಸಿ ಕಾರಿನ ಚಾಲಕರ ಸಂಘಕ್ಕೆ ನೀಡಬೇಕು ಎಂದು ಪ್ರವಾಸಿ ಕಾರಿನ ಚಾಲಕರ ಸಂಘ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಮಾಡಿದೆ.

ಶಿವಮೊಗ್ಗ ನಗರದಲ್ಲಿ ಆ.11ರಿಂದ ವಿಮಾನ ಹಾರಾಟ ಸೇವೆ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ. ಇದು ಅತ್ಯಂತ ಸಂತೋಷದ ವಿಷಯ. ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಬಾಡಿಗೆ ವಾಹನದ ಸೇವೆ ನೀಡಲು ನಮ್ಮ ಸಂಘಕ್ಕೇ ಅವಕಾಶ ಮಾಡಿಕೊಡಬೇಕು. ನಮ್ಮ ಸಂಘವು ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ ಎಂದರು.

ನಮ್ಮಲ್ಲಿ 400ಕ್ಕೂ ಹೆಚ್ಚು ಗುಣಮಟ್ಟದ ವಾಹನಗಳಿವೆ. ಅತ್ಯುತ್ತಮ ಸೇವೆಯನ್ನು ಕೂಡ ನೀಡುತ್ತೇವೆ. ಇದನ್ನು ಮನಗಂಡು ನಮ್ಮ ಸಂಘಕ್ಕೇ ವಾಹನ ಸೇವೆ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಚಾಲಕರ ಸಂಘದ ಅಧ್ಯಕ್ಷ ಗಣೇಶ್‌ಬಿ.ಡಿ., ಎನ್. ರಾಘವೇಂದ್ರ, ಎಸ್.ಜಿ. ನರಸಿಂಹಮೂರ್ತಿ, ರವಿ, ಕೇಶವಮೂರ್ತಿ ಮುಂತಾದವರಿದ್ದರು.