Flowers in Chania

ವಿವಿಧ ಬೇಡಿಕೆಗಳ ಈಡೇರಿಕೆಗೆ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್‍ಸ್ ಪೆಂಡರೇಷನ್ ನಿಂದ ಪ್ರತಿಭಟನೆ

ಶಿವಮೊಗ್ಗ :- ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್‍ಸ್ ಪೆಂಡರೇಷನ್ ವತಿಯಿಂದ ಇಂದು ಕೆಎಸ್‌ಆರ್‌ಟಿಸಿ ಡಿಪೋ ಬಳಿ ನೌಕರರು ಪ್ರತಿಭಟನೆ ನಡೆಸಿದರು.

ನೌಕರರ ವೇತನ ಪರಿಷ್ಕರಣ ಮಾಡಬೇಕು, ಮೂಲವೇತನಕ್ಕೆ ಶೇ.೨೫ ರಷ್ಟು ಹೆಚ್ಚಳ ಮಾಡಬೇಕು, ಈಗಿರುವ ಶೇ.೧೫ರ ವೇತನ ಹೆಚ್ಚಳದ ೩೮ ತಿಂಗಳ ಬಾಕಿ ಹಣ ಕೊಡಬೇಕು. ಪಿ.ಎಫ್. ಗ್ಯಾಚ್ಯುಟಿ ರಜ ನಗಧೀಕರಣ ಮತ್ತಿತರ ಸೌಲಭ್ಯಗಳನ್ನು ನೀಡಬೇಕು, ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ, ವೇತನವನ್ನು ಕೂಡ ಪರಿಷ್ಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಚಾಲಕರು, ನಿರ್ವಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿಗಳಿಗೆ ಹಾಗೂ ಇತರೆ ನೌಕರರ ಭತ್ಯೆಗಳನ್ನು ೫ ಪಟ್ಟು ಹೆಚ್ಚಿಸಬೇಕು, ವೈದ್ಯಕೀಯ ಸೌಲಭ್ಯದ ಮೂಲಕ ಉಚಿತ ಔಷಧ ಪೂರೈಸಬೇಕು, ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ನೀಡಬೇಕು, ಕಡಿತಗೊಳಿಸಲಾಗಿದ್ದ ಅಪಘಾತ ವಿಮೆ ಫ್ರಿಮಿಯಂ ಹಣವನ್ನು ಮರುಪಾವತಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಮಹಾದೇವ್, ರಮೇಶ್ ಬಿ., ಮಂಜುನಾಥ್, ರಾಜು, ಚಿನ್ನಸ್ವಾಮಿ, ಸುಬ್ರಹ್ಮಣ್ಯ, ರವಿಕುಮಾರ್, ಸಂಗನ ಬಸವಯ್ಯ, ಧರ್ಮರಾಜ್, ಆರ್.ಟಿ. ನಾಯ್ಕ್ ಇನ್ನಿತರರಿದ್ದರು.

Abhi

Abhi

Leave a Reply

Your email address will not be published. Required fields are marked *