ಶಿವಮೊಗ್ಗ :- ನಗರದ ಆರ್. ಮಹಾರಾಜ್ ರಸ್ತೆಯ (ಓಪಿ ರಸ್ತೆ) ಚಿನ್ಮಯ ಮಿಷನ್ನಲ್ಲಿ ಸೆ. 6ರ ನಾಳೆ ಸಂಜೆ 5.30ಕಕ್ೆ ಶ್ರೀಕೃಷ್ಣ ಜನಾ್ಮಷ್ಟಮಿ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಲಿದೆ.
ರಾಧಾ-ಕೃಷ್ಣ ವೇಷ ಧರಿಸಿದ ನೂರಾರು ಮಕಕ್ಳೊಂದಿಗೆ, ಭಜನೆ- ಸಂಕೀರ್ತನೆಗಳನೊ್ನಳಗೊಂಡ ಶ್ರೀಕೃಷ್ಣನ ಪಲ್ಲಕಕ್ಿ ಉತ್ಸವ ವೈಭವದಿಂದ ಜರುಗಲಿದೆ. ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸಾ್ಥನದಿಂದ ಆರಂಭಗೊಂಡು, ಚಿನ್ಮಯ ಮಿಷನ್ನಿನ ಚಿನ್ಮಯ ಸತ್ಸಂಗ ಭವನದವರೆಗೆ ಪಲ್ಲಕಕ್ಿ ಉತ್ಸವ ನಡೆಯಲಿದೆ.
ಅಂದು ಸಂಜೆ 6.15ರಿಂದ ಭಜನೆ, ಸಹಸ್ರನಾಮ ತುಳಸಿ ಅರ್ಚನೆ, ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗದೊಂದಿಗೆ ಕಾರ್ಯ ಕ್ರಮವು ಸಂಪನ್ನಗೊಳ್ಳಲಿದೆ. ಸದ್ಭಕ್ತರು ಈ ಸಂಭ್ರಮದಲ್ಲಿ ಪಾಲೊ್ಗಳ್ಳಬೇಕಾಗಿ ಶಿವಮೊಗ್ಗ ಚಿನ್ಮಯ ಮಿಷನ್ ಅಧ್ಯಕ್ಷ ರಮೇಶ್ ಅವಧಾನಿ ಕೋರಿದಾ್ದರೆ. ಪೋಷಕರು ಪಲ್ಲಕಕ್ಿ ಉತ್ಸವಕಕ್ೆ ತಮ್ಮ ಮಕಕ್ಳನ್ನು ಕೃಷ್ಣ- ರಾಧೆಯರ ವೇಷದಲ್ಲಿ ಕರೆತರಲು, ಪೂಜೆ- ಅರ್ಚನೆಗೆ ಹೂವು ಮತ್ತು ತುಳಸಿಯನ್ನು ಸಮರ್ಪಿಸಲು ಅವಕಾಶ ಇರುತ್ತದೆ. ಹೆಚ್ಚಿನ ಮಾಹಿತಿಗೆ 98444-44820ರಲ್ಲಿ ಸಂಪರ್ಕಿಸಲು ಕೋರಲಾಗಿದೆ.