Flowers in Chania

ದಸರಾ ಉತ್ಸವ ಆಚರಣೆಗೆ ಹಣ ಮಂಜೂರು ಮಾಡಲು ಮಹಾನಗರ ಪಾಲಿಕೆ ಸರ್ವಪಕ್ಷಗಳ ನಿಯೋಗ ಸಿಎಂಗೆ ಭೇಟಿ

ಶಿವಮೊಗ್ಗ :- ಈ ಭಾರಿ ನಾಡ ಹಬ್ಬ ದಸರಾ ಹಬ್ಬವನ್ನು ಶಿವಮೊಗ್ಗ ನಗರದಲ್ಲಿ ಅದ್ದೂರಿಯಾಗಿ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಇದಕಾಕ್ಗಿ ರಾಜ್ಯ ಸರ್ಕಾರ 1.5 ಕೋಟಿ ಹಣ ಮಂಜೂರು ಮಾಡುವಂತೆ ಶಿವಮೊಗ್ಗ ಮಹಾನಗರ ಪಾಲಿಕೆಯ ಸರ್ವ ಪಕ್ಷಗಳ ನಿಯೋ ಗವು ಶಾಸಕ ಚನ್ನಬಸಪ್ಪ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ.

ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ದಸರಾ ಕಾರ್ಯಕ್ರಮಗಳ ಪಟ್ಟಿಯನ್ನು ಪರಿಶೀಲಿಸಿ ಹಣ ಮಂಜೂರು ಮಾಡುವ ಕುರಿತಂತೆ ಸಕಾರಾತ್ಮಕ ವ್ಯಕ್ತಪಡಿಸಿ ಭರವಸೆ ನೀಡಿದಾ್ದರೆ.

ಕಳೆದ ಭಾರಿ ಶಿವಮೊಗ್ಗ ನಗರದ ದಸರಾ ಉತ್ಸವಕ್ಕೆ 1ಕೋಟಿ ಮಂಜೂರು ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕೂಡ ಹಲವು ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ ಯಶಸ್ವಿಗೊಳಿಸಲಾಗಿತ್ತು. ಈ ಭಾರಿಅದ್ದೂರಿಯಾಗಿ ನಡೆಸುವ ಸಲುವಾಗಿ ಇನ್ನೂ ಹೆಚ್ಚಿನ ಹಣ ಮಂಜೂರಿಗೆ ಪಾಲಿಕೆ ಸರ್ವಪಕ್ಷಗಳ ನಿಯೋಗ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್‌ ಶಿವಕುಮಾರ್‌, ಉಪ ಮೇಯರ್‌ ಲಕ್ಷ್ಮೀ ಶಂಕರ ನಾಯ್ಕ, ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್‌, ಆಡಳಿ ಪಕ್ಷದ ನಾಯಕ ಜ್ಞಾನೇಶ್ವರ್‌, ಪಾಲಿಕೆ ಸದಸ್ಯರಾದ ಹೆಚ್‌.ಸಿ. ಯೋಗೀಶ್‌, ನಾಗರಾಜ ಕಂಕಾರಿ, ವಿಶಾ್ವಸ್‌, ಧೀರರಾಜ್‌ ಹೊನ್ನವಿಲೆ, ರಾಜು, ಆರ್‌.ಸಿ. ನಾಯ್ಕ್, ಸುವರ್ಣ ಶಂಕರ್‌, ಭಾನುಮತಿ ವಿನೋದ್‌ ಇನ್ನಿತರರಿದ್ದರು.

Abhi

Abhi

Leave a Reply

Your email address will not be published. Required fields are marked *