ಶಿವಮೊಗ್ಗ :- ನಗರದ ಗೋಪಾಲಗೌಡ ಬಡಾವಣೆಯಲ್ಲಿ ಕಳೆದ ವರ್ಷವಷ್ಟೇ ಕಟ್ಟಿದ್ದ ಮೊದಲನೇ ಮಹಡಿಯ ಹೊಸ ಮನೆಯಲ್ಲಿ ಎರಡು ಸಿಲಿಂಡರ್ ಸ್ಪೋಟಗೊಂಡು ಸಾಕಷ್ಟು ಹಾನಿಯಾಗಿರುವ ಘಟನೆ ಇಂದು ಬೆಳಿಗ್ಗೆ 11.15ಕ್ಕೆ ಕೃಷ್ಣಮಠ ಪಾರ್ಕ್ ಹತ್ತಿರ ಪ್ರೊಫೆಸರ್ ಬಿ. ಕೃಷ್ಣಪ್ಪ ಅವರ ಮನೆಯಲ್ಲಿ ನಡೆದಿದೆ.
ಈ ಒಂದು ಘಟನೆಯಲ್ಲಿ ಯಾರಿಗೂ ಕೂಡ ಏನು ಆಗಿರುವುದಿಲ್ಲ. ಮನೆಯ ಒಳಭಾಗ ಸಂಪೂರ್ಣ ಜಖಮ್ ಆಗಿರುತ್ತದೆ ಹಾಗೂ ಅಕ್ಕ ಪಕ್ಕದ ಮನೆಯ ಕಿಟಕಿಗಳು ಹೊಡೆದು ಹೋಗಿದೆ. ಈ ಒಂದು ಘಟನಾ ಸ್ಥಳಕ್ಕೆ ರಾಜ್ಯ ಅಗ್ನಿ ಶಾಮಕ ತುರ್ತು ಸೇವೆಗಳು ಹಾಗೂ. ಸ್ಥಳೀಯ ಠಾಣಾಧಿಕಾರಿಗಳು. ಭೇಟಿ ಮಾಡಿ ಪರಿಶೀಲನೆ ಮಾಡಿರುತ್ತಾರೆ.