ಶಿವಮೊಗ್ಗ: ಪೊ್ರ, ಗೌರಿಶಂಕರ್ ಗೆಳೆಯರು ಸೆ. 8ರ ನಾಳೆಯಿಂದ 10ರವರೆಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಗೌರಿಶಂಕರ ನಾಟಕೋತ್ಸವ ಮತ್ತು ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ.
ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅಭಿನಂದನಾ ಸಮಿತಿ ಅಧ್ಯಕ್ಷ ಕೆ.ಎನ್. ಕಾಂತೇಶಮೂರ್ತಿ, ಪೊ್ರ. ಗೌರಿಶಂಕರ್ ಅವರು ಖಾ್ಯತ ನಿರ್ದೇಶಕರು. ಡಿವಿಎಸ್ ಕಾಲೇಜಿನಲ್ಲಿ ಉಪನಾ್ಯಸಕರಾಗಿ ಕಾರ್ಯನಿರ್ವಹಿ ಸಿದ್ದರು. ಹೆಸರಾಂತ ರಂಗಸಂಸ್ಥೆ ಅಭಿನಯ ತಂಡದ ಮೂಲಕ ಗುರುತಿಸಿಕೊಂಡು ಶೇಕ್ಸಪಿಯರ್ನ ಅನೇಕ ನಾಟಕಗಳನ್ನು ಕನ್ನಡಕಕ್ೆ ಅನುವಾದ ಮಾಡಿರಂಗಭೂಮಿಗೆ ತಂದು ಇಂಗ್ಲಿಷ್ ನಾಟಕಗಳಿಗೆ ಮೆರುಗು ಕೊಟ್ಟವರು. ಜೊತೆಗೆ ಹೊಸ ರಂಗ ಕಲಾವಿದರನ್ನು ಹುಟ್ಟು ಹಾಕಿದವರು ಎಂದರು.
ಖಾ್ಯತ ರಂಗಕರ್ಮಿಯ ನೆನಪಿನಲ್ಲಿ ಅವರಿಗೆ ಅಭಿನಂದನೆ ಮತ್ತು ಅವರೇ ನಿರ್ದೇಶಿಸಿದ ಮೂರು ನಾಟಕಗಳ ಪ್ರದರ್ಶನವನ್ನು ಸುವರ್ಣ ಸಂಸಕ್ತಿ ಭವನದಲ್ಲಿ ಪ್ರತಿದಿನ ಸಂಜೆ 6.30ಕಕ್ೆ ಹಮ್ಮಿಕೊಳ್ಳಲಾಗಿದೆ. ಸೆ. 8ರ ನಾಳೆ ಸಂಜೆ 6.30ಕಕ್ೆ ಮಹಾಬಲಯ್ಯನ ಕೋಟು, 9ರಂದು ಪೀಠಾರೋಹಣ, 10ರಂದು ಗೌರಿಶಂಕರ್ ನಟಿಸಿ, ನಿರ್ದೇಶಿಸಿರುವ ಮೃಗತೃಷಾ್ಣ ಹಾಗೂ ಕೆಲವು ನಾಟಕಗಳ ತುಣುಕು ಗಳನ್ನು ಪ್ರದರ್ಶಿಸಲಾಗುವುದು ಎಂದರು.
ಇದರ ಉದಾ್ಘಟನಾ ಸಮಾರಂಭ ಸೆ. 8ರ ಸಂಜೆ 6.30ಕಕ್ೆ ನಡೆಯಲಿದೆ. ರಂಗ ಕಲಾವಿದರ ಒಕಕ್ೂಟದ ಅಧ್ಯಕ್ಷ ಟಿ. ಕಮಲಾಕರ್ ಉದಾ್ಘಟಿಸುವರು. ಅಮೃತ್ನೋನಿಯ ವ್ಯವಸಾ್ಥಪಕ ನಿರ್ದೇಶಕ ಶ್ರೀನಿವಾಸಮೂರ್ತಿ ಮತ್ತು ಪೊ್ರ ಎಸ್.ಸಿ. ಗೌರಿಶಂಕರ್ ಉಪಸ್ಥಿತರಿರುವರು ಎಂದರು.
ಸೆ. 8ರಂದು ಸಂಜೆ 6.30ಕಕ್ೆ ವೇದಿಕೆ ಕಾರ್ಯಕ್ರಮದಲ್ಲಿ ವಿಜಯಾ ಕಾಂತೇಶ್, ಶೈಲಜಾ ಕುಮಾರಸಾ್ವಮಿ, ದೀಪಾ, ಅನ್ನಪೂರ್ಣ ಕೃಷ್ಣಮೂರ್ತಿ ಅವರನ್ನು ಸನಾ್ಮನಿಸಲಾಗುವುದು. 9ರಂದು ಟಿ.ವಿ. ಹೆಗಡೆ, ಕೆ.ಎಂ. ಕಾಂತೇಶಮೂರ್ತಿ, ಮಂಜುನಾಥ ಕೂಡುವಳ್ಳಿ, ಎಂ. ಮಹೇಶ್, ಎನ್.ಜಿ. ಜಯಕುಮಾರ್ ಅವರನ್ನು ಸನಾ್ಮನಿಸಲಾಗುವುದು ಎಂದರು.
ಅಭಿನಂದನಾ ಸಮಿತಿಯ ಸಂಚಾಲಕ ಪೊ್ರ.ಕೆ.ಜಿ. ವೆಂಕಟೇಶ್ ಮಾತನಾಡಿ, 10ರಂದು ಸಂಜೆ 6-30ಕಕ್ೆ ಸಮಾರೋಪ ಸಮಾರಂಭ ಆಯೋ ಜಿಸಲಾಗಿದೆ. ಈ ಸಂದರ್ಭದಲ್ಲಿ ಎಸ್.ಸಿ. ಗೌರಿಶಂಕರ ಅವರನ್ನು ಅಭಿನಂದಿಸಲಾಗುವುದು. ಸಾಗರದ ರಂಗಕರ್ಮಿ ಪೊ್ರ. ವಿಜಯವಾಮನ್, ಅಭಿನಂದನಾ ನುಡಿಗಳನಾ್ನಡುವರು. ಚಲನಚಿತ್ರ ನಿರ್ದೇಶಕ ರಂಗಕರ್ಮಿ ಬಿ. ಸುರೇಶ್ ಸಮಾರೋಪ ನುಡಿಗಳನಾ್ನಡುವರು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಅಭಿಮಾನಿ ಬಳಗದ ಪ್ರಮುಖರಾದ ಸುರೇಶ್ ಎಸ್.ಹೆಚ್., ಎಸ್.ಪಿ. ಶ್ರೀಕಂ ಪ್ರಸಾದ್ ಉಪಸ್ಥಿತರಿದ್ದರು.